ನೆಲದ ಬೆಲೆ ಉಳಿಸೋಣ

ಅಟ್ಟೋಣ, ಮೆಟ್ಟೋಣ ಕೆಚ್ಚೆದೆಯ ಮಿಂಚಿನಲಿ
ತಟ್ಟೋಣ ದವಡೆಯನೆ ಧಾಂಡಿಗರ ಸಂಚಿನಲಿ….

ನಮ್ಮುಸಿರ ಬಿಸಿಯು ಆರುವ ಮುನ್ನ
ನಮ್ಮೆದೆಯ ಅಸುವು ನೀಗುವ ಮುನ್ನ
ನಾಡಿಗರ ಹಸಿರಕ್ತ ಬರಿದೆ ಹೋಗುವ ಮುನ್ನ
ಕ್ರೋಧದುರಿ ಮೈತಾಳಿ ನಮ್ಮನೇ ಸುಡುವ ಮುನ್ನ…
ಅಟ್ಟೋಣ ದ್ರೋಹಿಗಳ, ಮೆಟ್ಟೋಣ ಬನ್ನಿ
ಕಟ್ಟಳೆಯ ಬದಿಗಿಟ್ಟು ಉರಿವ ಬೆಂಕಿಯ ತನ್ನಿ

ನಮ್ಮಳಲು ನಮಗಿರಲಿ
ಕೆಂಪಿರುಳು ಬೇಡ
ಸ್ವಾತಂತ್ರ್ಯ ಉಳಿದಿರಲಿ
ದಾಸ್ಯದಳು ಬೇಡ….

ನಮ್ಮೂರು ಕನಸಿನ ನಾಕ
ನಮ್ಮವರು ಉಸಿರಿತ್ತು
ಸಾವನ್ನೆ ಮುತ್ತಿಟ್ಟು
ನಮಗಿತ್ತ ಸುರಲೋಕ….

ನಮ್ಮೊಡಲ ಒಡೆಯರು ನಾವು
ಒಮ್ಮನದಿ ವೈರಿಗಳ ಹೊಡೆದು
ಜೀವ-ಭಾವೈಕ್ಯದ ಸಿಡಿಲ-ಮಳೆಗರೆದು
ದೇಶಕಂಟಕರ ಕೆಡಿಸುವೆವು….. ಇಲ್ಲವೆ ಸಾವು!

ಕಾಳರಾತ್ರಿಯ ಭಯವ ತಡೆದು
ಹಾಳು ಪ್ರಭುತನದ ಬೇಡಿ ಒಡೆದು
ಹೊಸತೇಜ-ಓಜಗಳ ಮೆರಗಿಂದ
ರಸಭರಿತ ಬೀಡಕಟ್ಟಿಹೆವು ನಾವು….

ನಮ್ಮ ನೆಲ ಚಂದನದ ಕಂಪಿನದು
ನಮ್ಮ ಹೊಲ ಹಸುರುಮಯ ಸೊಂಪಿನದು
ಶಾಂತಿದೂತರ, ಕ್ರಾಂತಿವೀರರ
ನಮ್ಮಕುಲ ಇಳೆಯಲತಿ ಪೆಂಪಿನದು…

ರಣಕಹಳೆ ನಾಡಿಗಳ ಹೊಕ್ಕು ನೆತ್ತರಿನ
ಕಣಕಣದಿ ಹೊಸ ಬಿರುಸನಿತ್ತು
ಕೆಣಕುತಿದೆ ನಮ್ಮ ನೆಲದಭಿಮಾನವನಿಂದು
ಹೋಗೋಣ ಬನ್ನಿ, ಮಾತೆಯ ಮಾನ ಉಳಿಸೋಣ

ಭಾರತಾಂಬೆಯ ವೀರ ಪುತ್ರರು
ಮೇರುಗಿರಿಯ ಹಿಮಖಂಡದಲಿ
ನೆತ್ತರಿನ ಕುಯಿಲು ಹರಿಸುತಿರೆ
ಭೀತರಾಗದೆ ನಾವು ನೆಗೆಯೋಣ, ಬಗೆಯೋಣ….

ಹೊನ್ನು ಮಣ್ಣಿನ ಕಲಹ ಬೇಡ ನಮಗಿಂದು
ಕುನ್ನಿಗಳ ಕೆಂಗಣ್ಣ ಕಿಡಿಯಿಹುದು ಮುಂದು
ನನ್ನಿಯಲಿ ನಮ್ಮೊಲವು
ಚಿನ್ನಿಗಳ ಕಣ್ಣುಗಳೆ ನಮಗೆ ಕುಂದು

ಇಂದು ಬನ್ನಿ ಒಂದಾಗೋಣ
ಮುಂದೆ ಎದೆಸೆಟೆದು ಸಾಗೋಣ
ಕಡೆಯುಸಿರು ಇರುವನಕ
ನೆಲದ ಬೆಲೆ ಉಳಿಸೋಣ…

(ಅಡಿಗರನ್ನು ನೆನೆದು)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾರೆಗಳ ಊರಲ್ಲಿ
Next post ತುಂಬು ಮುಳ್ಳಿನೊಳಿಲ್ಲವೇ ಮಾಧುರ್‍ಯ?

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys